ದಿವಂಗತ ಪಾಟೀಲ ಪುಟ್ಟಪ್ಪನವರನ್ನು ಕುರಿತು
ಕನ್ನಡದ ಸಾಕ್ಷಿ: ಧೀಮಂತ ಮತ್ತು ನಿರ್ಭೀತ ಪಾಪು
ಡಾ. ಹೆಚ್ಚೆನ್ ಮಂಜುರಾಜ್, ಕನ್ನಡ ಸಹಪ್ರಾಧ್ಯಾಪಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ ಆರ್ ಸಾಗರ
ನಡೆನುಡಿ: 9900119518
ಡಾ. ಹೆಚ್ಚೆನ್ ಮಂಜುರಾಜ್, ಕನ್ನಡ ಸಹಪ್ರಾಧ್ಯಾಪಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ ಆರ್ ಸಾಗರ
ನಡೆನುಡಿ: 9900119518
ಕನ್ನಡ ನಾಡಿನ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿದು ತಮ್ಮ ಬರೆಹ ಮತ್ತು ಬದುಕಿನಿಂದ ನಾಡು ಮತ್ತು ನುಡಿಗೆ ಶಕ್ತಿಯುಣಿಸಿ, ಜೀವಧಾತುವಾದವರು ಇಬ್ಬರು ಪುಟ್ಟಪ್ಪಂದಿರು! ಒಬ್ಬರು ಕೆ ವಿ ಪುಟ್ಟಪ್ಪ: ರಸಋಷಿಯಾಗಿ ಕನ್ನಡಮ್ಮನನ್ನು ಮಾನಸ ಸರೋವರದಲ್ಲಿ ಮಡಿ ಮಾಡಿ ಗೌರೀಶಂಕರವನ್ನು ಹತ್ತಿಸಿ ಧನ್ಯರಾಗಿಸಿದವರು. ಮತ್ತೊಬ್ಬರು ಇತ್ತೀಚೆಗೆ ನಿಧನರಾದ ಅದಮ್ಯ ಕ್ರಿಯಾಶೀಲ ಚೇತನ ನಿಷ್ಠಾವಂತ ಪತ್ರಿಕೋದ್ಯಮಿಯಾದ ಪಾಟೀಲ ಪುಟ್ಟಪ್ಪನವರು.
ಹುಬ್ಬಳ್ಳಿ ಮೂಲದ ಪಾಟೀಲ ಪುಟ್ಟಪ್ಪನವರು 1949 ರಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಹಾವೇರಿಯ ಕುರುಬಗೊಂಡ ಹಳ್ಳಿಯಲ್ಲಿ ಜನಿಸಿ, ಗ್ರಾಮೀಣ ಪ್ರತಿಭೆಯಾಗಿ ವ್ಯಾಸಂಗ ಮಾಡಿದ ಪಾಪು ಅವರು ಮೊದಲಿಗೆ ಪ್ರಾರಂಭಿಸಿದ್ದು ವಕೀಲಿ ವೃತ್ತಿಯನ್ನು. ಕಕ್ಷಿಗಾರರಿಲ್ಲದೇ ಉದ್ಯೋಗವನ್ನರಸಿ ಮುಂಬೈಗೆ ಪಯಣಿಸಿದರು. ಅಲ್ಲಿ ಪತ್ರಿಕಾ ಕಚೇರಿಗಳ ನಂಟಿನಿಂದಾಗಿ ಪತ್ರಿಕೋದ್ಯಮದಲ್ಲಿ ಆಸಕ್ತಿ ಕುದುರಿತು. ಬಾಂಬೆಯ ಕ್ರಾನಿಕಲ್ ಪತ್ರಿಕೆಯ ಮತ್ತು ಆ ಪತ್ರಿಕೆಯವರ ಸ್ನೇಹದಿಂದ ಅಮೆರಿಕೆಗೆ ತೆರಳುವಂತಾಯಿತು. ಜರ್ನಲಿಸಂನಲ್ಲಿ ಎಂಎಸ್ಸಿ ಪದವಿ ಗಳಿಸಿ, ಅಲ್ಲಿ ನಿಲ್ಲದೇ ಭಾರತಕ್ಕೆ ಹಿಂದಿರುಗಿ ಬಂದು, ವಿಶಾಲ ಕರ್ನಾಟಕ, ನವಯುಗ, ಮನೋರಮ, ಸ್ತ್ರೀ ಮಾಸಿಕ ಮತ್ತು ಪ್ರಪಂಚ ಎಂಬ ಪತ್ರಿಕೆಗಳನ್ನು ಶುರು ಮಾಡಿದರು.
ಇವರ ಮೊನಚಿನ ಬರೆಹಕ್ಕೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಹುದ್ದೆ ನಿರಾಯಾಸವಾಗಿ ಒಲಿದು ಬಂತು. ನಾವೆಲ್ಲ ಯುವಕರಾಗಿದ್ದಾಗ ಪಾಪು ಅವರ ಹೆಸರು ಈ ಮೂಲಕವೇ ತಿಳಿದದ್ದು. ಈಗಿನ ವಿಶ್ವೇಶ್ವರಭಟ್ರ ಸಂಪಾದಕತ್ವದಲ್ಲಿ ಬರುತ್ತಿರುವ ವಿಶ್ವವಾಣಿ ಎಂಬ ಹೆಸರಿನ ಪತ್ರಿಕೆಯನ್ನು ಪಾಪು ಅವರೇ ಮೊದಲು ಶುರು ಮಾಡಿದ್ದು. ಆಡಳಿತದಲ್ಲಿ ಮತ್ತು ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯ ದುರವಸ್ಥೆ ಕಂಡು ರೋಸಿ ಹೋಗಿದ್ದ ಪಾಪು ಅವರು ಕನ್ನಡ ಬಳಕೆಗೆ ಇನ್ನಿಲ್ಲದಂತೆ ಆಗ್ರಹಿಸಿದರು. ಇದೊಂದು ಚರಿತ್ರಾರ್ಹ ಸಾಧನೆಯೇ ಸರಿ.
ಇವೆಲ್ಲದರ ನಡುವೆಯೇ ಅವರ ಲೇಖನಿಯಿಂದ ಹಲವಾರು ಕೃತಿಗಳು ಹೊರಬಂದವು. ಸಾವಿನ ಮೇಜುವಾನಿ, ಗವಾಕ್ಷ ತೆರೆಯಿತು, ಶಿಲಾಬಾಲಿಕೆಯ ನುಡಿಗಳು ಎಂಬ ಕಥಾಸಂಕಲನಗಳು. ನನ್ನೂರು ಈ ನಾಡು, ಹೊಸದನ್ನು ಕಟ್ಟೋಣ, ಬದುಕುವ ಮಾತು ಎಂಬ ಪ್ರಬಂಧ ಸಂಕಲನಗಳು. ಸಿದ್ದಪ್ಪ ಕಂಬಳಿ ಮತ್ತು ಹೊಸಮನಿ ಸಿದ್ದಪ್ಪನವರು ಎಂಬ ಜೀವನ ಚರಿತ್ರೆಗಳು ಇವರ ಬರೆಹದ ಸಾಕ್ಷೀಪ್ರಜ್ಞೆಯಾಗಿವೆ.
ಇವರನ್ನು ಹುಡುಕಿ ಬಂದ ಪ್ರಶಸ್ತಿ-ಪುರಸ್ಕಾರಗಳು ಹಲವು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿವಿಯ ನಾಡೋಜ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ಸಂಸತ್ತಿನ ರಾಜ್ಯಸಭಾ ಸದಸ್ಯತ್ವ ಎರಡು ಬಾರಿ, ಕರ್ನಾಟಕ ಸರ್ಕಾರ ಕೊಡ ಮಾಡುವ ಟಿಎಸ್ಸಾರ್ ಪತ್ರಿಕಾ ಪ್ರಶಸ್ತಿ ಹೀಗೆ. 2003 ರಲ್ಲಿ ಬೆಳಗಾವಿಯಲ್ಲಿ ನಡೆದ 70 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ.
ಓದುಗರ ಜ್ಞಾನ ವಿಸ್ತಾರಕ್ಕೆಂಬಂತೆ ಪ್ರಪಂಚ ಎಂಬ ಸುಂದರ ವಾರಪತ್ರಿಕೆಯನ್ನು ನಡೆಸಿದರು. ವರ್ತಮಾನದ ಏನೆಲ್ಲ ವಿಚಾರಗಳಿಗೆ ಕೈಗನ್ನಡಿಯಾಗಿ ತಮ್ಮ ಬರೆಹವನ್ನು ನಡೆಸಿ, ವಿವಿಧ ಪತ್ರಿಕೆಗಳಲ್ಲಿ ಅಂಕಣ ನಿರ್ವಹಿಸಿದ ಕೀರ್ತಿ ಪಾಪು ಅವರದು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಬೆಳೆಸಿದ್ದರಲ್ಲಿ ಇವರ ಪಾತ್ರ ಯಾವತ್ತೂ ಸ್ಮರಣೀಯ. ಧೀಮಂತ ಮತ್ತು ನಿರ್ಭೀತ ವ್ಯಕ್ತಿತ್ವ ಪಾಪು ಅವರದು. ಕೆಲವೊಂದು ಸಂದರ್ಭದಲ್ಲಿ ಡಾ. ಶಿವರಾಮ ಕಾರಂತರನ್ನು ನೆನಪಿಸುವ ಖಂಡತುಂಡ ನೇರ ನಡೆನುಡಿಯ ಗಜಗಾಂಭೀರ್ಯ. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಅವರು ನಡೆಸಿದ ಹೋರಾಟ ಅನನ್ಯ ಮತ್ತು ಅಸಾಮಾನ್ಯ. ಇವೆಲ್ಲ ಆಗಿರುವುದರ ಜೊತೆಗೆ ಅವರದು ಸುಸಂಸ್ಕೃತ ಮನಸ್ಸು. ಜೀವನದ ಎಲ್ಲ ಆಗುಹೋಗುಗಳಿಂದ ಅನುಭವದ ಪಾಠ ಕಲಿತ ಮತ್ತು ಕಲಿಸುವ ಅದಮ್ಯ ಜೀವನೋತ್ಸಾಹದ ಚಿಲುಮೆ ಆದರ್ಶನೀಯ. ಒಂದುನೂರ ಒಂದು ವರ್ಷಗಳ ತುಂಬು ಬದುಕು ಇವರದು. ಇಂದಿನ ನಮ್ಮ ಕನ್ನಡವು ತಲೆಯೆತ್ತಿ ನಿಂತು ತನ್ನ ಸರೀಕರೊಂದಿಗೆ ತುಂಬು ವಿಶ್ವಾಸದಿಂದ ಮಾತಾಡುವಂತಾಗಿದೆಯೆಂದರೆ ಇಂಥವರ ಅಪ್ರತಿಮ ಹೋರಾಟ ಮತ್ತು ಕಾಳಜಿಯುತ ಅನುಷ್ಠಾನದಿಂದ ಎಂದರೆ ಅತಿಶಯೋಕ್ತಿಯಲ್ಲ.
**********************
- ಡಾ. ಹೆಚ್ ಎನ್ ಮಂಜುರಾಜ್, ಮೈಸೂರು,
ದಿನಾಂಕ 15-04-2020 ರಂದು ವಿಚಾರಪ್ರಜ್ಞೆ ಪಾಕ್ಷಿಕ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ
ಹುಬ್ಬಳ್ಳಿ ಮೂಲದ ಪಾಟೀಲ ಪುಟ್ಟಪ್ಪನವರು 1949 ರಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಹಾವೇರಿಯ ಕುರುಬಗೊಂಡ ಹಳ್ಳಿಯಲ್ಲಿ ಜನಿಸಿ, ಗ್ರಾಮೀಣ ಪ್ರತಿಭೆಯಾಗಿ ವ್ಯಾಸಂಗ ಮಾಡಿದ ಪಾಪು ಅವರು ಮೊದಲಿಗೆ ಪ್ರಾರಂಭಿಸಿದ್ದು ವಕೀಲಿ ವೃತ್ತಿಯನ್ನು. ಕಕ್ಷಿಗಾರರಿಲ್ಲದೇ ಉದ್ಯೋಗವನ್ನರಸಿ ಮುಂಬೈಗೆ ಪಯಣಿಸಿದರು. ಅಲ್ಲಿ ಪತ್ರಿಕಾ ಕಚೇರಿಗಳ ನಂಟಿನಿಂದಾಗಿ ಪತ್ರಿಕೋದ್ಯಮದಲ್ಲಿ ಆಸಕ್ತಿ ಕುದುರಿತು. ಬಾಂಬೆಯ ಕ್ರಾನಿಕಲ್ ಪತ್ರಿಕೆಯ ಮತ್ತು ಆ ಪತ್ರಿಕೆಯವರ ಸ್ನೇಹದಿಂದ ಅಮೆರಿಕೆಗೆ ತೆರಳುವಂತಾಯಿತು. ಜರ್ನಲಿಸಂನಲ್ಲಿ ಎಂಎಸ್ಸಿ ಪದವಿ ಗಳಿಸಿ, ಅಲ್ಲಿ ನಿಲ್ಲದೇ ಭಾರತಕ್ಕೆ ಹಿಂದಿರುಗಿ ಬಂದು, ವಿಶಾಲ ಕರ್ನಾಟಕ, ನವಯುಗ, ಮನೋರಮ, ಸ್ತ್ರೀ ಮಾಸಿಕ ಮತ್ತು ಪ್ರಪಂಚ ಎಂಬ ಪತ್ರಿಕೆಗಳನ್ನು ಶುರು ಮಾಡಿದರು.
ಇವರ ಮೊನಚಿನ ಬರೆಹಕ್ಕೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಹುದ್ದೆ ನಿರಾಯಾಸವಾಗಿ ಒಲಿದು ಬಂತು. ನಾವೆಲ್ಲ ಯುವಕರಾಗಿದ್ದಾಗ ಪಾಪು ಅವರ ಹೆಸರು ಈ ಮೂಲಕವೇ ತಿಳಿದದ್ದು. ಈಗಿನ ವಿಶ್ವೇಶ್ವರಭಟ್ರ ಸಂಪಾದಕತ್ವದಲ್ಲಿ ಬರುತ್ತಿರುವ ವಿಶ್ವವಾಣಿ ಎಂಬ ಹೆಸರಿನ ಪತ್ರಿಕೆಯನ್ನು ಪಾಪು ಅವರೇ ಮೊದಲು ಶುರು ಮಾಡಿದ್ದು. ಆಡಳಿತದಲ್ಲಿ ಮತ್ತು ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯ ದುರವಸ್ಥೆ ಕಂಡು ರೋಸಿ ಹೋಗಿದ್ದ ಪಾಪು ಅವರು ಕನ್ನಡ ಬಳಕೆಗೆ ಇನ್ನಿಲ್ಲದಂತೆ ಆಗ್ರಹಿಸಿದರು. ಇದೊಂದು ಚರಿತ್ರಾರ್ಹ ಸಾಧನೆಯೇ ಸರಿ.
ಇವೆಲ್ಲದರ ನಡುವೆಯೇ ಅವರ ಲೇಖನಿಯಿಂದ ಹಲವಾರು ಕೃತಿಗಳು ಹೊರಬಂದವು. ಸಾವಿನ ಮೇಜುವಾನಿ, ಗವಾಕ್ಷ ತೆರೆಯಿತು, ಶಿಲಾಬಾಲಿಕೆಯ ನುಡಿಗಳು ಎಂಬ ಕಥಾಸಂಕಲನಗಳು. ನನ್ನೂರು ಈ ನಾಡು, ಹೊಸದನ್ನು ಕಟ್ಟೋಣ, ಬದುಕುವ ಮಾತು ಎಂಬ ಪ್ರಬಂಧ ಸಂಕಲನಗಳು. ಸಿದ್ದಪ್ಪ ಕಂಬಳಿ ಮತ್ತು ಹೊಸಮನಿ ಸಿದ್ದಪ್ಪನವರು ಎಂಬ ಜೀವನ ಚರಿತ್ರೆಗಳು ಇವರ ಬರೆಹದ ಸಾಕ್ಷೀಪ್ರಜ್ಞೆಯಾಗಿವೆ.
ಇವರನ್ನು ಹುಡುಕಿ ಬಂದ ಪ್ರಶಸ್ತಿ-ಪುರಸ್ಕಾರಗಳು ಹಲವು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿವಿಯ ನಾಡೋಜ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ಸಂಸತ್ತಿನ ರಾಜ್ಯಸಭಾ ಸದಸ್ಯತ್ವ ಎರಡು ಬಾರಿ, ಕರ್ನಾಟಕ ಸರ್ಕಾರ ಕೊಡ ಮಾಡುವ ಟಿಎಸ್ಸಾರ್ ಪತ್ರಿಕಾ ಪ್ರಶಸ್ತಿ ಹೀಗೆ. 2003 ರಲ್ಲಿ ಬೆಳಗಾವಿಯಲ್ಲಿ ನಡೆದ 70 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ.
ಓದುಗರ ಜ್ಞಾನ ವಿಸ್ತಾರಕ್ಕೆಂಬಂತೆ ಪ್ರಪಂಚ ಎಂಬ ಸುಂದರ ವಾರಪತ್ರಿಕೆಯನ್ನು ನಡೆಸಿದರು. ವರ್ತಮಾನದ ಏನೆಲ್ಲ ವಿಚಾರಗಳಿಗೆ ಕೈಗನ್ನಡಿಯಾಗಿ ತಮ್ಮ ಬರೆಹವನ್ನು ನಡೆಸಿ, ವಿವಿಧ ಪತ್ರಿಕೆಗಳಲ್ಲಿ ಅಂಕಣ ನಿರ್ವಹಿಸಿದ ಕೀರ್ತಿ ಪಾಪು ಅವರದು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಬೆಳೆಸಿದ್ದರಲ್ಲಿ ಇವರ ಪಾತ್ರ ಯಾವತ್ತೂ ಸ್ಮರಣೀಯ. ಧೀಮಂತ ಮತ್ತು ನಿರ್ಭೀತ ವ್ಯಕ್ತಿತ್ವ ಪಾಪು ಅವರದು. ಕೆಲವೊಂದು ಸಂದರ್ಭದಲ್ಲಿ ಡಾ. ಶಿವರಾಮ ಕಾರಂತರನ್ನು ನೆನಪಿಸುವ ಖಂಡತುಂಡ ನೇರ ನಡೆನುಡಿಯ ಗಜಗಾಂಭೀರ್ಯ. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಅವರು ನಡೆಸಿದ ಹೋರಾಟ ಅನನ್ಯ ಮತ್ತು ಅಸಾಮಾನ್ಯ. ಇವೆಲ್ಲ ಆಗಿರುವುದರ ಜೊತೆಗೆ ಅವರದು ಸುಸಂಸ್ಕೃತ ಮನಸ್ಸು. ಜೀವನದ ಎಲ್ಲ ಆಗುಹೋಗುಗಳಿಂದ ಅನುಭವದ ಪಾಠ ಕಲಿತ ಮತ್ತು ಕಲಿಸುವ ಅದಮ್ಯ ಜೀವನೋತ್ಸಾಹದ ಚಿಲುಮೆ ಆದರ್ಶನೀಯ. ಒಂದುನೂರ ಒಂದು ವರ್ಷಗಳ ತುಂಬು ಬದುಕು ಇವರದು. ಇಂದಿನ ನಮ್ಮ ಕನ್ನಡವು ತಲೆಯೆತ್ತಿ ನಿಂತು ತನ್ನ ಸರೀಕರೊಂದಿಗೆ ತುಂಬು ವಿಶ್ವಾಸದಿಂದ ಮಾತಾಡುವಂತಾಗಿದೆಯೆಂದರೆ ಇಂಥವರ ಅಪ್ರತಿಮ ಹೋರಾಟ ಮತ್ತು ಕಾಳಜಿಯುತ ಅನುಷ್ಠಾನದಿಂದ ಎಂದರೆ ಅತಿಶಯೋಕ್ತಿಯಲ್ಲ.
**********************
- ಡಾ. ಹೆಚ್ ಎನ್ ಮಂಜುರಾಜ್, ಮೈಸೂರು,
ದಿನಾಂಕ 15-04-2020 ರಂದು ವಿಚಾರಪ್ರಜ್ಞೆ ಪಾಕ್ಷಿಕ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ
0 Comments:
Post a Comment
Subscribe to Post Comments [Atom]
<< Home